Sunday 8 January 2023

ತಿರೋಕುಟ್ಟ ಸುತ್ತ tirokutta sutta in kannada

 ತಿರೋಕುಟ್ಟ ಸುತ್ತ

 ಗೋಡೆಯಾಚೆಗಿನ ಪ್ರೇತಗಳ ಘಟನೆ



ಬಿಂಬಸಾರ ರಾಜನು ಮಲಗಿರುವಾಗ ಅತ್ಯಂತ ಭೀಕರವಾದ ಶಬ್ದಗಳನ್ನು ಕೇಳಿದನು. ಅದರಿಂದ ಭಯಭೀತನಾಗಿ ಭಗವಾನರ ಬಳಿಗೆ ಬಂದು ವಿಷಯವನ್ನು ತಿಳಿಸಿದನು.: ಭಗವಾನ್ ನೀವು ಏನಾದರೂ ಅಂತಹ ಶಬ್ದಗಳನ್ನು ಕೇಳಿದಿರಾ , ಅದರಿಂದಾಗಿ ನನಗೆ ಏನಾದರೂ ಸಂಭವಿಸುವುದೇ ಎಂದು ನಾನು ಭಯಭೀತನಾಗಿರುವೆನು..

ಆಗ ಭಗವಾನರು ಹೀಗೆ ಉತ್ತರಿಸಿದರು: ಭಯ ಬೇಡ ಮಹಾರಾಜ, ನಿನಗೆ ಯಾವ ಹಾನಿಯೂ ಜರುಗದು, ಬದಲಾಗಿ ಉನ್ನತಿಯು ನಿನ್ನ ಹಾದಿಯಲಿ ಬರುವುದು, ಈ ಶಬ್ಧಗಳು ಪ್ರೇತಗಳದ್ದಾಗಿದೆ ಇವರು ನಿನ್ನ ಪೂರ್ವಜನ್ಮದ ಬಂಧುಗಳಾಗಿದ್ದಾರೆ, ಇವರು ಹಿಂದಿನ ಬುದ್ಧರ ಕಾಲದವರು, ತಮ್ಮ ಈ ಪ್ರೇತ ಜನ್ಮದ ವಿಮೋಕ್ಷಕ್ಕಾಗಿ ಆಗಿನಿಂದ ಕಾಯುತ್ತಿದ್ದಾರೆ. ಅವರ ಬಯಕೆ ಏನೆಂದರೇ ಈತನು ಬುದ್ಧರಿಗೆ ದಾನವನ್ನು ಅಪರ್ಿಸಿ ಅದರ ಪುಣ್ಯಫಲವನ್ನು ನಮಗೆ ನೀಡುವನು ಅಲ್ಲದೆ ನೆನ್ನೆ ನೀನು ದಾನವನ್ನು ನೀಡಿಯೂ ಪುಣ್ಯವನ್ನು ಹಂಚಲಿಲ್ಲ. ಹೀಗಾಗಿ ಅವರು ಹತಾಶರಾಗಿ ಹೀಗೆ ಪ್ರಲಾಪದ ಕೂಗುಗಳನ್ನು ಮಾಡಿದ್ದಾರೆ. 

ಆಗ ರಾಜನು ಹೀಗೆ ಕೇಳಿದನು ಹಾಗಾದರೇ ಭಗವಾನ್ ಅವರು ದಾನದ ಫಲವನ್ನು ಸ್ವೀಕರಿಸುವರೇ?

ಹೌದು

ಭಗವಾನ್, ಹಾಗಾದರೇ ದಯೆಯಿಟ್ಟು ನಾಳೆ ನನ್ನ ಅರೆಮನೆಯಲ್ಲಿ ದಾನವನ್ನು ಸ್ವೀಕರಿಸಿ ಧನ್ಯನನ್ನಾಗಿಸಿ, ಅವರಿಗೆ ದಾನ ಫಲವನ್ನು ಹಂಚುವೆನು.

ಆಗ ಮಹಾದಾನಿಯಾದ ಅರಸನು ಅತ್ಯಂತ ಸ್ವಾದಿಷ್ಟಮಯವಾದ ಆಹಾರಗಳನ್ನು ಸಿದ್ದಪಡಿಸಿದನು. ಇವನೆಲ್ಲಾ ಗಮನಿಸುತ್ತಿದ್ದಂತಹ ಪ್ರೇತಗಳು ಆನಂದಗೊಂಡವು. ಹಾಗೂ ಗೋಡೆಯಾಚೆ ನಿಂತವು. ಭಗವಾನರ ಸಂಕಲ್ಪದಿಂದಾಗಿ ಬಿಂಬಸಾರನಿಗೂ ಅವರೆಲ್ಲ ಕಾಣಿಸತೊಡಗಿದರು. 

ಯಾವಾಗ ರಾಜನು ಕೈತೊಳೆಯಲು ನೀರು ನೀಡುತ್ತಿದ್ದಂತೆ ಹೀಗೆ ಸಂಕಲ್ಪಿಸಿದನು ಇವೆಲ್ಲಾ ನನ್ನ ಜ್ಞಾತಿ(ಬಂಧು)ಗಳಿಗೆ ಸೇರಲಿ ತಕ್ಷಣ ಅವರು ಕಮಲಗಳುಳ್ಳ ಸರೋವರಕ್ಕೆ ಬಂದಿಳಿದರು, ಅವರೆಲ್ಲ ಅಲ್ಲಿ ಸ್ನಾನ ಮಾಡಿ, ತೃಪ್ತರಾಗಿ ನೀರನ್ನು ಸೇವಿಸಿದವು, ಅದಕ್ಕೆ ಮುಂಚೆ ಅವಕ್ಕೆ ನೀರು ಸೇವಿಸಲು ಸಾಧ್ಯವಾಗುತ್ತಿರಲಿಲ್ಲ, ಅವು ನೀರು ಸೇವಿಸುತ್ತಿದಂತೆ ಅವುಗಳ ಬಾಯಾರಿಕೆ, ದಣಿವು, ಖಿನ್ನತೆ ದೂರವಾಗಿ ಹೊಂಬಣ್ಣದವರಾದವು, ರಾಜನು ಸ್ವಾದಿಷ್ಟಮಯ ಬಗೆಬಗೆಯ ಆಹಾರಗಳನ್ನು ಬಡಿಸುತ್ತಿದ್ದಂತೆಯೇ, ಈ ಹಿಂದೆ ತಿನ್ನಲಾಗದಂತಹ ಸ್ಥಿತಿಯಲ್ಲಿದ್ದ ಅವುಗಳು ದೇವಲೋಕದಂತಹ ಆಹಾರವನ್ನು ಆನಂದದಿಂದ ಸೇವಿಸತೊಡಗಿದವು. ಹಾಗೆಯೆ ರಾಜನು ಭಿಕ್ಖುಗಳಿಗೆ ವಸ್ತ್ರದಾನಗಳನ್ನು ನೀಡುತ್ತಿದ್ದಂತೆಯೇ ಅವುಗಳು ದೇವ ವಸ್ತ್ರಗಳನ್ನು ಪಡೆದವು. ವಿಹಾರ ದಾನ ನೀಡುತ್ತಿದ್ದಂತೆಯೇ ದೇವ ಮಹಲುಗಳನ್ನು ಪಡೆದವು, ಹೀಗೆ ಬಗೆಬಗೆಯ ಸೌಲಭ್ಯಗಳನ್ನು ಅವು ಪಡೆದವು. ಆಗ ಭಗವಾನರು ಸಹಾ ಅವರು ಪಡೆಯುತ್ತಿದ್ದಂತಹ ಆನಂದವು ರಾಜನಿಗೂ ಲಭಿಸಲಿ ಎಂದು ಸಂಕಲ್ಪಿಸಿದರು. ಇದರಿಂದಾಗಿ ರಾಜನು ಸಹಾ ಆನಂದಭರಿತನಾದನು. ಆಗ ಭಗವಾನರು ರಾಜ ಹಾಗೂ ರಾಜ ಪರಿವಾರಕ್ಕೆ ತಿರೋಕುಟ್ಟ ಸುತ್ತವನ್ನು ಬೋಧಿಸಿದರು.

ತಿರೋಕುಟ್ಟ ಸುತ್ತ

1.  ಅವರು ಗೋಡೆಯಾಚೆ,  ತೆರೆದ ಸ್ಥಳಗಳಲ್ಲಿ ಮತ್ತು ರಸ್ತೆಗಳು ಸೇರುವ ಸ್ಥಳಗಳಲ್ಲಿ ದ್ವಾರಗಳ ಬಳಿ, ತಮ್ಮ ಹಿಂದಿನ ಮನೆಗಳ ಬಳಿ ಬಂದು ನಿಲ್ಲುವವು.

2. ಅದರೆ ಹೇರಳವಾದ ಸ್ವಾದಿಷ್ಟ ಬೋಜ್ಯಗಳು ಹಾಗೂ ಪಾನಿಯಗಳು ಸಿದ್ಧವಾಗಿದ್ದರೂ ಸಹಾ ಆ ಜೀವಿಗಳ ಪಾಪಯುತ ಅಕುಶಲ ಕಮ್ಮದಿಂದಾಗಿ ಯಾರೂ ಅವರನ್ನು ನೆನೆಯಲಾರರು.

3. ಹೀಗಾಗಿ ಯಾರು ಅನುಕಂಪಶೀಲರೋ ಅವರು ಯೋಗ್ಯ ಕಾಲದಲ್ಲಿ, ಪರಿಶುದ್ಧವಾದ, ಉತ್ಕೃಷ್ಟವಾದ, ಯೋಗ್ಯವಾದ ಭೋಜ್ಯಗಳನ್ನು ಹಾಗೂ ಪಾನಿಯಗಳನ್ನು ಪ್ರೇತಗಳಿಗೆ ನೀಡುವರು. ಹಾಗೂ ಹೀಗೆ ಸಂಕಲ್ಪಿಸುವರು : 

ಇವು ನಮ್ಮ ಜ್ಞಾತಿಗಳಿಗೆ(ಬಂಧುಗಳಿಗೆ) ಸೇರಲಿ, ನಮ್ಮ ಜ್ಞಾತಿಗಳೂ ಧನ್ಯರಾಗಲಿ ಸುಖಿಯಾಗಿರಲಿ.

4. ಆಗ ಯಾವೆಲ್ಲಾ ಪ್ರೇತಗಳು ಗುಂಪು ಸೇರಿ ಆಹಾರಗಳಿಂದ ಹಾಗೂ ಪಾನಿಯಗಳಿಂದ ಧನ್ಯರಾಗುವವೋ ಅವು ಗೌರವಪೂರ್ವಕವಾಗಿ ಹೀಗೆ ಕೃತಜ್ಞತೆ ಅಪರ್ಿಸುವವು. ಹಾಗೂ ಹೀಗೆ ಹೇಳುವವು 

5. ನಮ್ಮ ಜ್ಞಾತಿಯು ಚಿರವಾಗಿ ಜೀವಿಸಲಿ, ಆತನಿಂದಾಗಿ ಈ ಲಾಭವನ್ನು ಪಡೆದು, ಗೌರವಿಸಲ್ಟಟ್ಟಿದ್ದೇವೆ, ಋಣಿಯಾಗಿದ್ದೇವೆ, ನಮಗೆ ನೀಡಿದಂತಹ ಆತನೂ ಸಹಾ ಪ್ರತಿಫಲವನ್ನು ಪಡೆಯುವಂತಾಗಲಿ.

6. ಅಲ್ಲಿ (ಪ್ರೇತಲೋಕದಲ್ಲಿ) ಯಾವ ವ್ಯವಸಾಯವೂ ಇಲ್ಲ, ಯಾವ ಪಶುಪಾಲನೆಯು ಇಲ್ಲ, ಹಾಗೆಯೇ ಯಾವ ವ್ಯಾಪಾರವೂ ಇಲ್ಲ, ಹಾಗೇಯೆ ಸ್ವರ್ಣದಿಂದಾಗುವಂತಹ ಯಾವ ವಿನಿಮಯವೂ ಇಲ್ಲ.

7. ಹೇಗೆ ಮಳೆಯ ನೀರು ಮೇಲಿನಿಂದ ಕೆಳಕ್ಕೆ ಧುಮಿಕ್ಕಿ, ಹರಿಯುವುದೋ ಹಾಗೇಯೇ ಪ್ರೇತಗಳು ದಾನದಿಂದ ಅವಲಂಬಿತವಾಗಿವೆ. ಹೀಗಾಗಿ ಇಲ್ಲಿ ಏನೆಲ್ಲಾ ದಾನವಾಗಿ ನೀಡುವೆವೋ ಅದು ಅಲ್ಲಿ ಪ್ರೇತಗಳಿಗೆ ಲಾಭವಾಗುವುದು.

8. ಹೇಗೆ ನದಿಗಳು ತುಂಬಿದಾಗ ಅವು ಹಾಗೇಯೆ ಸಾಗಿ ಸಾಗರವನ್ನು ಸೇರುವಂತೆ, ಹಾಗೆಯೇ ಯಾವುದೆಲ್ಲವೂ ಇಲ್ಲಿ ನೀಡಿದ್ದೇವೆಯೋ ಅವು ಪ್ರೇತಗಳಿಗೆ ದೊರೆತು ಲಾಭವನ್ನುಂಟು ಮಾಡುತ್ತವೆ.

9. ಈತನು ನನಗೆ ನೀಡಿದ್ದಾನೆ, ನನಗಾಗಿ ಕೆಲಸಗಳನ್ನು ಮಾಡಿದ್ದಾನೆ, ನನಗೆ ಈತನು ಬಂಧುವು, ಮಿತ್ರನು ಹಾಗೂ ಸಖನು ಆಗಿದ್ದನು, ಈ ರೀತಿಯಲ್ಲಿ ಅವರು ಈ ಹಿಂದೆ ಮಾಡಿದಂತಹ ಸಹಾಯಗಳನ್ನು ನೆನೆದು ಪ್ರೇತಗಳಿಗೆ ದಾನಗಳನ್ನು ಸಮಪರ್ಿಸಬೇಕು.

10. ಯಾವುದೇ ಆಶ್ರುಗಳಿಂದಾಗಲಿ, ಅಥವಾ ಶೋಕಗಳಿಂದಾಗಲಿ ಅಥವಾ ಯಾವುದೇ ಪ್ರಲಾಪಗಳಿಂದಾಗಲಿ ಎಲ್ಲಿಯವರೆಗೆ ಬಂಧುಗಳು ಈ ರೀತಿಗಳಲ್ಲಿ ದುಃಖಿಸುವರೋ ಇದರಿಂದಾಗಿ ಪ್ರೇತಗಳಿಗೆ ಯಾವುದೇ ಪ್ರಯೋಜನವಾಗದು.

11. ಅದರೆ ಅವರಿಗೆ ತಲುಪುವಂತೆ ಸಂಘಕ್ಕೆ ಸುಪ್ರತಿಷ್ಟಿತವಾಗಿ ನೀಡಿದಂತಹ ದಾನವು ಮಾತ್ರ ಅವರಿಗೆ ದೀರ್ಘಕಾಲ ಹಿತವನ್ನು ಲಾಭವನ್ನು ನೀಡುತ್ತದೆ. ಕಾಲವಿಳಂಬವಿಲ್ಲದೆ ತಕ್ಷಣವೇ ಅವರಿಗೆ ಫಲವನ್ನು ನೀಡುವುದು.

12. ಇದು ಬಂಧುಗಳಿಗೆ ನಾವು ಮಾಡುವಂತಹ ನಿಜ ಕರ್ತವ್ಯವೂ ಸಹಾ, ಹಾಗೆಯೇ ಅಗಲಿದವರಿಗೆ ನಾವು ನೀಡುವಂತಹ ಶ್ರೇಷ್ಟ ಗೌರವವೂ ಸಹಾ, ಭೋಜ್ಯ ಪಾನಿಯಗಳಿಂದ ಭಿಕ್ಖುಗಳಿಗೆ ದಾನ ನೀಡುವುದರಿಂದ ಅವರಿಗೆ ಶಕ್ತಿಯು ದೊರೆಯುವುದು, ಮತ್ತು ಇದು ನಿಮ್ಮಿಂದ ಉತ್ಪನ್ನವಾದ ಸಣ್ಣ ಪುಣ್ಯವೇನಲ್ಲ.


- ಂ0ಂ  

Sunday 28 August 2022

ಮಿತ್ತ ಸುತ್ತ mitta sutta in kannada

                       ಮಿತ್ತ ಸುತ್ತ


 ಭಿಕ್ಖುಗಳೇ, ಮಿತ್ರನು ಈ 7 ಗುಣಗಳಿಂದ ಕೂಡಿರುವಾಗ ಆತನು ಸಹವತರ್ಿಯಾಗಲು ಅರ್ಹನಾಗುತ್ತಾನೆ.

ಯಾವುವವು ಏಳು ?


1. ಆತನು ಯಾವುದನ್ನು ಪರರು ನೀಡಲು ಕಷ್ಟಕರವಾಗಿರುವುದೋ ಅದನ್ನೇ ನೀಡುತ್ತಾನೆ,

2. ಆತನು ಯಾವುದನ್ನು ಪರರು ಮಾಡಲು ಹಿಂಜರಿಯುತ್ತಾರೋ ಅದನ್ನೇ ಮಾಡುತ್ತಾನೆ,

3. ಆತನು ಸಹಿಸಲು ಅತಿದುಸ್ಸಹವಾಗಿರುವುದನ್ನು ಸಹಿಸುತ್ತಾನೆ,

4. ಆತನು ತನ್ನ ರಹಸ್ಯಗಳನ್ನೆಲ್ಲಾ ಮಿತ್ರನ ಬಳಿ ತೆರೆದಿಡುತ್ತಾನೆ,

5. ಆದರೆ ಮಿತ್ರನ ರಹಸ್ಯಗಳನ್ನು ಅಡಗಿಸಿಡುತ್ತಾನೆ,

6. ಯಾವಾಗ ವಿಪತ್ತುಗಳು ಆಕ್ರಮಣ ಮಾಡುವವು ಆಗ ಆತನು ಮಿತ್ರನಿಗೆ ತೊರೆಯುವುದಿಲ್ಲ,

7.  ಯಾವಾಗ ಮಿತ್ರನು ನಿರ್ಗತಿಕ ಅಥವಾ ನಿರ್ಧನನಾಗುವನೋ ಆಗ ಆತನನ್ನು ಕೀಳಾಗಿ ಕಾಣುವುದಿಲ್ಲ. 


   ಆತನು ಸುಂದರವಾಗಿರುವುದನ್ನು ನೀಡಲು ಕಷ್ಟಕರವಾಗಿದ್ದರೂ ನೀಡುತ್ತಾನೆ.

ಮಾಡಲು ಅತಿಕಠಿಣವಾಗಿದ್ದರೂ ಮಾಡುತ್ತಾನೆ,

ಆಲಿಸಲು ಅತ್ಯಂತ ಹೇಯವಾದ ಕಠೋರವಾದ ಮಾತುಗಳನ್ನು ಸಹಿಸುತ್ತಾನೆ.

ಆತನ ರಹಸ್ಯಗಳನ್ನು ನಿನಗೆ ನುಡಿಯುತ್ತಾನೆ,

ನಿನ್ನ ರಹಸ್ಯಗಳನ್ನು ಬಚ್ಚಿಡುತ್ತಾನೆ,

ಯಾವಾಗ ದುರಂತಗಳು, ಆಪಾಯಗಳು ಬೀಳುತ್ತವೆಯೋ ಆತನು ನಿನ್ನನ್ನು ವಜರ್ಿಸಲಾರ.

ಯಾವಾಗ ನೀನು ಅವನತಿಗೆ ಈಡಾಗುವೆಯೋ ಆಗ ನಿನಗೆ ಕೀಳಾಗಿ ನೋಡಲಾರನು.

ಯಾರಲ್ಲಿ ಈ ಸಪ್ತ ಸದ್ಗುಣಗಳನ್ನು ನೋಡುತ್ತೆವೆಯೊ ಮಿತ್ರತ್ವ ಬಯಸುವವನು ತಕ್ಷಣ ಆತನ ಸ್ನೇಹವನ್ನು ಬಲಿಷ್ಟಗೊಳಿಸಬೇಕು.




 

Saturday 27 August 2022

ಕಿಂ ದಾನ ಸುತ್ತ kimdana sutta in kannada

    ಕಿಂ ದಾನ ಸುತ್ತ 




ದೇವನೊಬ್ಬನ ಪ್ರಶ್ನೆ :


1. ಏನನ್ನು ದಾನ ನೀಡಿದರೆ ಶಕ್ತಿಯನ್ನು ನೀಡುತ್ತಾನೆ ?

2. ಏನನ್ನು ದಾನ ನೀಡಿದರೆ ಸೌಂದರ್ಯವನ್ನು ನೀಡುತ್ತಾನೆ ?

3. ಏನನ್ನು ದಾನ ನೀಡಿದರೆ ಆರಾಮ  ನೀಡುತ್ತಾನೆ ?

4. ಏನನ್ನು ದಾನ ನೀಡಿದರೆ ದೃಷಿ ನೀಡುತ್ತಾನೆ ?

5. ಮತ್ತು ಏನನ್ನು ದಾನ ನೀಡಿದರೆ ಎಲ್ಲವನ್ನು ದಾನ ನೀಡಿದಂತೆ ಆಗುವುದು ?


  ಬುದ್ಧ ಭಗವಾನರ ಉತ್ತರ :


 1. ಆಹಾರ ನೀಡುವ ದಾನಿಯು ಶಕ್ತಿಯನ್ನು ನೀಡುತ್ತಾನೆ.

2. ವಸ್ತ್ರಗಳನ್ನು ನೀಡುವ ದಾನಿಯು ಸೌಂದರ್ಯವನ್ನು ನೀಡುತ್ತಾನೆ .

3. ವಾಹನವನ್ನು ನೀಡುವ ದಾನಿಯು ಆರಾಮವನ್ನು ನೀಡುತ್ತಾನೆ.

4. ದೀಪಗಳನ್ನು ನೀಡುವ ದಾನಿಯು ದೃಷ್ಟಿಯನ್ನು ನೀಡುತ್ತಾನೆ.

5.  ಮತ್ತು ವಸತಿಯನ್ನು ನೀಡುವ ದಾನಿಯು ಎಲ್ಲವನ್ನು ದಾನ ನೀಡಿದಂತೆ ಆಗುವುದು.

ಅದರೆ ಧಮ್ಮವನ್ನು (ಬುದ್ಧರ ಬೋಧನೆ) ನೀಡುವ ದಾನಿಯು ಅಮರತ್ವವನ್ನೇ ನೀಡುತ್ತಾನೆ.

 

Saturday 12 June 2021

ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6) byasana sutta (A.N. 11.6)

  ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6)



 " ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ."

"  ಯಾವುದವು 11 ?"

  "1. ಅಂತಹವರು ಪ್ರಾಪ್ತಿ ಮಾಡಬೇಕಾಗಿರುವುದನ್ನು ಪ್ರಾಪ್ತಿ ಮಾಡುವುದಿಲ್ಲ.


  2.ಅಥವಾ ಅಂತಹವರು ಯಾವುದನ್ನು ಪ್ರಾಪ್ತಿ ಮಾಡಿರುವರೋ ಅದರಿಂದ ಕೆಳಕ್ಕೆ ಬೀಳುವರು. ಅಂದರೆ ಅವನ್ನು ಕಳೆದುಕೊಳ್ಳುವರು.


   3. ಅಥವಾ ಅಂತಹವರು ಅವರು ತಮ್ಮ ಸದ್ಗುಣಗಳನ್ನು ಪರಿಶುದ್ಧಿಗೊಳಿಸುವುದಿಲ್ಲ.


    4. ಅಥವಾ ಅಂತಹವರು ತಮ್ಮ ಸದ್ಗುಣಗಳ ಬಗ್ಗೆ ಅತಿಯಾಗಿ ಅಂದಾಜು ಮಾಡುತ್ತಾರೆ. ವಾಸ್ತವವಾಗಿ ಹಾಗೆ ವಿಕಾಸವಾಗಿರುವುದಿಲ್ಲ. 


     5. ಅಥವಾ ಅಂತಹವರು ತಮ್ಮ ಧಾಮರ್ಿಕ ಜೀವನವನ್ನು ಅಸಂತುಷ್ಟರಾಗಿ ಜೀವಿಸುತ್ತಾರೆ. 


      6. ಅಥವಾ ಅಂತಹವರು ಭ್ರಷ್ಟ ಅಪರಾದಗಳಲ್ಲಿ ತೊಡಗುತ್ತಾರೆ.


       7. ಅಥವಾ ಅಂತಹವರು ತಮ್ಮ ಶಿಕ್ಷಣಕ್ಕೆ ರಾಜಿನಾಮೆ ನೀಡಿ ನೀಚ ಜೀವನಕ್ಕೆ ಹಿಂತಿರುಗುತ್ತಾರೆ. 


        8. ಅಥವಾ ಅಂತಹವರು ಭೀಕರ ರೋಗಕ್ಕೆ ಗುರಿಯಾಗುತ್ತಾರೆ. 


       9. ಅಥವಾ ಅಂತಹವರು ತಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. 


        10. ಅಥವಾ ಅಂತಹವರು ಸಾಯುವಾಗ ನಷ್ಟತನದ ಭಾವವನ್ನು ಹೊಂದುತ್ತಾರೆ. 


        11. ಮತ್ತು ಅಂತಹವರು ಸಾವಿನ ನಂತರ, ಕಾಯವು ಭೇಧವಾದ ನಂತರ ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತಗಳಲ್ಲಿ, ನಿರಯಗಳಲ್ಲಿ ಜನಿಸುತ್ತಾರೆ. "


  "   ಹೀಗೆ ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ.."


" ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವುದಿಲ್ಲವೋ, ಅವಮಾನ ಮಾಡುವುದಿಲ್ಲವೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವುದಿಲ್ಲವೋ, ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದೂ ಪಡೆಯುವುದಿಲ್ಲ." .


  


 

Sunday 30 May 2021

ದುತಿಯಪರಿಹಾನಿ ಸುತ್ತ dutiya parihani sutta : ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.

   ದುತಿಯಪರಿಹಾನಿ ಸುತ್ತ


ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.



   ಭಿಕ್ಖುಗಳೇ, ಈ ಏಳು ವಿಷಯಗಳಿಂದ ಉಪಾಸಕನು ಅವನತಿಗೆ ಈಡಾಗುತ್ತಾನೆ ?

  

       ಯಾವುವವು ಏಳು ?


  " 1. ಅವನು ಭಿಕ್ಖುಗಳನ್ನು ದಶರ್ಿಸಲು (ನೋಡಲು) ನಿಲ್ಲಿಸುತ್ತಾನೆ.


    2. ಅವನು ಧಮ್ಮವನ್ನು ಕೇಳಲು ಅಲಕ್ಷಿಸುತ್ತಾ ಇರುತ್ತಾನೆ.


    3. ಅವನು ಉನ್ನತವಾದ (ಪಂಚ)ಶೀಲವನ್ನು ಪಾಲಿಸುವುದಿಲ್ಲ.


     4. ಅವನು ಭಿಕ್ಖುಗಳ ಬಗ್ಗೆ ಅಪಾರವಾಗಿ ಸಂಶಯಸ್ಥನಾಗುತ್ತಾನೆ. ಆ ಭಿಕ್ಖುಗಳು ಹಿರಿಯ ಥೇರರೇ ಆಗಿರಲಿ, ಹೊಸ ಸಮಣೇರರೇ ಆಗಿರಲಿ, ಅಥವಾ ವರ್ಷಗಳು ಸಾಧನೆ ಮಾಡುತ್ತಿರುವ ಭಿಕ್ಖುಗಳೇ ಆಗಿರಲಿ. ಅವರ ಬಗ್ಗೆ ಸಂಶಯಸ್ಥನಾಗಿರುತ್ತಾನೆ.


      5. ಆತನು ಧಮ್ಮವನ್ನು ಆಲಿಸುವಾಗಲೂ ಸಹಾ ಟೀಕಾತ್ಮಕವಾಗಿಯೇ, ತಪ್ಪುಗಳನ್ನು ಹುಡುಕುವ ರೀತಿಯಲ್ಲಿಯೇ ಧಮ್ಮವನ್ನು ಆಲಿಸುತ್ತಾನೆ.


       6. ಆತನು ಆರಿಯರಲ್ಲದ ಉದಾರಲ್ಲದ ವ್ಯಕ್ತಿಗಳಾದ ಹೊರಗಿನವರಿಗೆ ದಾನಕ್ಕೆ, ಆತಿಥ್ಯಕ್ಕೆ, ಜ್ಞಾನಕ್ಕೆ ಅರ್ಹರೆಂದು ಭಾವಿಸಿ ಅವರನ್ನೇ ಹಿಂಬಾಲಿಸುತ್ತಾನೆ. 


       7. ಆತನು ಆ ಉದಾರಲ್ಲದವರಲ್ಲಿಯೇ ಗೌರವ, ಜ್ಙಾನಗಳಿಕೆ, ದಾನ, ಸೇವೆ, ಆತಿಥ್ಯಗಳೆಲ್ಲವನ್ನು ಮಾಡುತ್ತಾನೆ.

  

      ಈ ಏಳು ವಿಷಯಗಳಿಂದ ಉಪಾಸಕನು(ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ 






 .


 

Thursday 24 September 2020

ಮಹಾನಾಮ ಸುತ್ತ (55.37)

 ಮಹಾನಾಮ ಸುತ್ತ (55.37)



ಒಮ್ಮೆ ಭಗವಾನರು ಶಾಕ್ಯರ ನಗರವಾದ ಕಪಿಲವಸ್ತುವಿನ ನಿಗ್ರೋಧ ಆರಾಮ(ಉಧ್ಯಾನವನ)ದಲ್ಲಿ ನೆಲಸಿದ್ದರು. ಆ ಸಮಯದಲ್ಲಿ ಶಾಕ್ಯರ ಹಿರಿಯರಾದಂತಹ ಮಹಾನಾಮರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ನಂತರ ಅವರು ಭಗವಾನರೊಂದಿಗೆ ಹೀಗೆ ಸಂಬೋದಿಸಿದರು : "ಭಂತೆ ಯಾವ ರೀತಿಯಲ್ಲಿ ಒಬ್ಬನು ಉಪಾಸಕನಾಗುತ್ತಾನೆ(ಬೌದ್ಧನಾಗುತ್ತಾನೆ)"

"ಇಲ್ಲಿ ಮಹಾನಾಮ ಒಬ್ಬನು ಬುದ್ಧರ ಶರಣು ಹೋದಾಗ, ಧಮ್ಮದ ಶರಣು ಹೋದಾಗ, ಸಂಘದ ಶರಣು ಹೋದಾಗ ಆತನು ಈ ರೀತಿಯಲ್ಲಿ ಉಪಾಸಕ(ಬೌದ್ಧ)ನಾಗುತ್ತಾನೆ."


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶೀಲಸಂಪನ್ನನು ಆಗುತ್ತಾನೆ. (ಶೀಲಯುತ ಬೌದ್ಧನೆನಸಿಕೊಳ್ಳುತ್ತಾನೆ)."

"ಇಲ್ಲಿ ಮಹಾನಾಮ ಪ್ರಾಣಗಳನ್ನು ತೆಗೆಯುವುದರಿಂದ ವಿರತನಾದರೆ, ಕೊಡದೆ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಕಾಮುಕತೆಗಳ ಮಿಧ್ಯಾಚಾರಗಳಿಂದ(ಅನೈತಿಕ ಸಂಬಂಧಗಳಿಂದ, ಬಲತ್ಕಾರಗಳಿಂದ) ವಿರತನಾದರೆ, ಸುಳ್ಳು ಹೇಳುವುದರಿಂದ ವಿರತನಾದರೆ, ಮತ್ತು ಸುರ,ಮೆರೆಯ,ಇತರ ಪ್ರಮಾದ ತರುವ ಮಧ್ಯಪಾನ(ಮಾದಕ ವಸ್ತುಗಳಿಂದ)ಗಳಿಂದ ವಿರತನಾದಗ ಒಬ್ಬನು ಶೀಲ ಸಂಪನ್ನ ಬೌದ್ಧನಾಗುತ್ತಾನೆ." 


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶ್ರದ್ಧಸಂಪನ್ನನು ಆಗುತ್ತಾನೆ. (ಶ್ರದ್ಧಯುತ ಬೌದ್ಧನೆನಸಿಕೊಳ್ಳುತ್ತಾನೆ)"

"ಇಲ್ಲಿ ಮಹಾರಾಜ ಈ ರೀತಿಯಲ್ಲಿ ಶ್ರದ್ಧಾಸಂಪನ್ನನು ಆಗುತ್ತಾನೆ, ಹೇಗೆಂದರೆ ಆತನಿಗೆ ತಥಾಗತರ ಬೋಧಿಯ(ಜ್ಞಾನ ಪ್ರಾಪ್ತಿಯ) ಮೇಲೆ ಅಚಲ ವಿಶ್ವಾಸವಿರುತ್ತದೆ, ಹೇಗೆಂದರೆ "ಭಗವಾನರು ಖಂಡಿತವಾಗಿಯು ಅರಹಂತರಾಗಿದ್ದಾರೆ(ಕಲ್ಮಶರಹಿತರು), ಸಮ್ಮಸಂಬುದ್ಧರಾಗಿದ್ದಾರೆ(ಸ್ವಯಂ ಆಗಿಯೇ ಸಂಪೂರ್ಣ ಸಂಬೋಧಿ ಪ್ರಾಪ್ತಿ ಮಾಡಿದ್ದಾರೆ), ವಿಜ್ಜಾಚರಣ ಸಂಪನ್ನರು(ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ), ಸುಗತರು(ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ)ೆ., ಲೋಕವಿಧರು (ಅವರು ಲೋಕಗಳನ್ನು ಬಲ್ಲವರು. ಅವರು (ಭಗವಾನರು) ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಹೇಳಿದ್ದಾರೆ: ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.), ಅನುತ್ತರ ಪುರುಷ ಧಮ್ಮಸಾರಥಿಯು (ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.), ದೇವ-ಮನುಷ್ಯರಿಗೆ ಗುರುವು(ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆಯನ್ನು ಮಾನವರಿಗೆ ಮತ್ತು ದೇವತೆಗಳಿಗೆ ನೀಡುತ್ತಿದ್ದುದರಿಂದಾಗಿ ಅವರನ್ನು ದೇವತೆಗಳಿಗೆ ಹಾಗೂ ಮಾನವರಿಗೆ ಶಾಸ್ತರು ಎನ್ನುತ್ತಾರೆ.), ಬುದ್ಧರು (ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.) ಆಗಿದ್ಧಾರೆ ಹಾಗೂ ಭಗವಾನರಾಗಿದ್ದಾರೆ( 'ಭಗವಾನರು' ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು, ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು. ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.) ಈ ರೀತಿಯಲ್ಲಿ ಮಹಾನಾಮ,  ಉಪಾಸಕನು ಶ್ರದ್ಧಾಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ತ್ಯಾಗ(ದಾನ)ಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಸ್ವಾರ್ಥರಹಿತವಾದ ಮನೋಭಾವದಿಂದ ಕೂಡಿರುತ್ತಾನೆ(ಜೀವಿಸುತ್ತಾನೆ), ಉದಾರಿಯಾಗಿರುತ್ತಾನೆ, ಸದಾ ದಾನದಲ್ಲೆ ಆನಂದಿತನಾಗಿ ದಾನಹಸ್ತನಾಗಿರುತ್ತಾನೆ, ಯಾಚಕರಿಗೆ ಮುಕ್ತನಾಗಿರುತ್ತಾನೆ, ಹಂಚುವಿಕೆಯಲ್ಲೆ ಸುಖ ಕಾಣುತ್ತಾನೆ. ಹೀಗೆ ಬಿಟ್ಟುಬಿಡುವುದರಲ್ಲಿ ತ್ಯಾಗದಲ್ಲಿ ಆನಂದಿಸುವನು, ಈ ರೀತಿಯಲ್ಲಿ ಮಹಾನಾಮ,  ಉಪಾಸಕನು  ತ್ಯಾಗಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಪ್ರಜ್ಞಾಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಪ್ರಜ್ಞವಂತನಾಗಿರುತ್ತಾನೆ(ಪನ್ನಾವ), ಆತನು ಉದಯ ಹಾಗೂ ಅಳಿಯುವಿಕೆಯ(ಮೆರೆಯಾಗುವಿಕೆಯ/ನಾಷವಾಗುವಿಕೆಯ)ಲ್ಲಿ ಜ್ಞಾನಿಯಾಗುತ್ತಾನೆ, ಅವುಗಳ ಜ್ಞಾನ ಆತನಿಗೆ ಇರುತ್ತದೆ, ಆ ಜ್ಞಾನವು ಉದಾತ್ತವಾದುದು(ಆರ್ಯರದ್ದು), ಅದು ಪರಮ ಬೇಧಕನೀಯವಾದುದ್ದು(ನಿಭ್ಭೇಧಿಕಾಯ), ಮತ್ತು ಅದು ದುಃಖಗಳ ಕ್ಷಯ(ಅಂತ್ಯ)ದೆಡೆಗೆ ಕರೆದೊಯ್ಯುವುದು. ಹೀಗೆ ಈ ರೀತಿಯಲ್ಲಿ  ಪ್ರಜ್ಞಾಸಂಪನ್ನ ಉಪಾಸಕ ಎಂದು ಕರೆಸಿಕೊಳ್ಳುತ್ತಾನೆ.






 

Sunday 12 July 2020

ಚುಲಕಮ್ಮವಿಭಂಗ ಸುತ್ತ culakammavibhanga sutta in kannada




ಚುಲಕಮ್ಮವಿಭಂಗ ಸುತ್ತ
(ಕಮ್ಮಫಲದ ವಿಶ್ಲೇಷಣೆಯ ಚಿಕ್ಕ ಸುತ್ತ)


ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯ ಆನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು.
ಆಗ ಬ್ರಾಹ್ಮಣ ವಿಧ್ಯಾಥರ್ಿಯಾದ ತೋದಯ್ಯನ ಮಗನಾದ ಸುಭನು ಭಗವಾನರ ಬಳಿಗೆ ಹೋದನು ಅವರಿಗೆ ವಂದಿಸಿ ಕುಶಲಗಳನ್ನು ವಿನಿಯೋಗಿಸಿಕೊಂಡನು. ಹೀಗೆ ಕುಶಲ ಮಾತುಕತೆಯ ನಂತರ ಆತನು ಭಗವಾನರ ಮುಂದೆ ಒಂದೆಡೆ ಕುಳಿತನು. ಮತ್ತು ಹೀಗೆ ಪ್ರಶ್ನಿಸಿದನು: 
"ಗೋತಮ ಭಗವಾನರೇ ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಯಿಂದಾಗಿ(ಬೆಂಬಲದಿಂದಾಗಿ) ಮಾನವರು ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುತ್ತಾರೆ. ? ಏಕೆಂದರೆ ಜನರು ಅಲ್ಪಾಯುಷ್ಯನಿಂದ ಹಾಗೂ ದೀಘರ್ಾಯುಷ್ಯನಿಂದ ಕಾಣಿಸುವರು. ರೋಗಿಗಳಾಗಿ ಮತ್ತು ಆರೋಗ್ಯವಂತರಾಗಿ ,ಅದೇ ರೀತಿ ಕುರೂಪಿಗಳಾಗಿ ಮತ್ತು ಸುರೂಪಿಗಳಾಗಿ, ಅಪ್ರಭಾವಿಗಳಾಗಿ ಮತ್ತು ಪ್ರಭಾವಿಗಳಾಗಿ, ಬಡವರಾಗಿ ಮತ್ತು ಸಿರಿವಂತರಾಗಿ, ನೀಚಕುಲದಲ್ಲಿ ಮತ್ತು ಉಚ್ಚಕುಲದಲ್ಲಿ, ದಡ್ಡರಾಗಿ ಹಾಗೇಯೆ ಪ್ರಜ್ಞಾವಂತರಾಗಿ, ಕಾಣಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಗಳಿಂದಾಗಿ ಮಾನವರು ಹೀಗೆ ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುವರು."

   " ಓ ಮಾಣವನೇ, 
ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು


"ಭಗವಾನರೇ ನಾನು ತಮ್ಮ ಬೋಧನೆಯ ಅರ್ಥವನ್ನು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿಲ್ಲ, ತಾವು ಸಂಕ್ಷೀಪ್ತವಾಗಿ ನುಡಿದಿದ್ದಿರಿ ವಿವರವಾಗಿ ಹೇಳಲಿಲ್ಲ.  ಹೀಗಾಗಿ ಭಗವಾನರು ನನಗೆ ಅರ್ಥವಾಗುವ ರೀತಿ ವಿಸ್ತಾರವಾಗಿ ಧಮ್ಮವನ್ನು ನುಡಿದರೆ ಬಹಳ ಒಳಿತಾಗುವುದು."

"ಹಾಗಾದರೇ ಮಾಣವನೇ ನಾನು ನುಡಿಯುವುದನ್ನೇ ಗಮನವಿಟ್ಟು ಆಲಿಸು."

"ಹಾಗೇ ಆಗಲಿ ಭಂತೆ" ಎಂದು ಶುಭನು ನುಡಿದನು.

  ಆಗ ಭಗವಾನರು ಹೀಗೆ ನುಡಿದರು :
"ಇಲ್ಲಿ ಮಾಣವನೇ ಹಲವು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಜೀವಿಗಳನ್ನು ಕೊಲ್ಲುತ್ತಾರೆ ಹೀಗೆ ಕೊಲೆಗಾರರಾಗುತ್ತಾರೆ, ರಕ್ತಸ್ಥಿಗ್ದ ಕೈಯುಳ್ಳವರಾಗಿ, ಹೊಡೆದಾಟಗಳಿಂದ ಮತ್ತು ಹಿಂಸೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ದಯೆರಹಿತರಾಗುತ್ತಾರೆ, ಈ ಬಗೆಯ ಕರ್ಮಗಳಿಂದ ಕೃತ್ಯಗಳಿಂದಾಗಿ ಸಾವಿನ ನಂತರ ಶರೀರದಿಂದ ವಿಚ್ಛೇದರಾದ ನಂತರ ಆಪಾಯ, ದುರ್ಗತಿ, ವಿನಿಪಾತ(ಅದಃಪತನ) ಮತ್ತು ನಿರಯಗಳಲ್ಲಿ ಉದಯಿಸುತ್ತಾರೆ.ಒಂದು ವೇಳೆ ಅವರು ಆಪಾಯಗಳಲ್ಲಿ, ದುಗ್ಗತಿಯಲ್ಲಿ, ವಿನಿಪಾತದಲ್ಲಿ ಮತ್ತು ನಿರಯಗಳಲ್ಲಿ ಹುಟ್ಟದೆ ಪುನಃ ಮಾನವರಾಗಿ ಹುಟ್ಟಿದ್ದರೆ ಆತನು ಅಥವಾ ಅವಳು ಅಲ್ಪಾಯುಷ್ಯವನ್ನು ಹೊಂದಿ ಹುಟ್ಟಿರುತ್ತಾರೆ. ಈ ರೀತಿಯಲ್ಲಿ ಮಾಣವನೇ ಒಬ್ಬನು ಜೀವಿಗಳನ್ನು ಕೊಲ್ಲುತ್ತಾ ಕೊಲೆಗಾರನಾಗಿ ರಕ್ತಸ್ಥಿಗ್ದ ಕೈಯುಳ್ಳವನಾಗಿ, ಹೊಡೆತ ಹಾಗೂ ಹಿಂಸೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ದಯೆರಹಿತನಾದರೆ ಹೀಗೆ ಅಲ್ಪಾಯುಷ್ಯದ ಜೀವನ ಪಡೆಯುತ್ತಾರೆ.


ಅದರೆ ಇಲ್ಲಿ ಮಾಣವಕನೇ ಹಲವು ಸ್ತ್ರೀ ಅಥವಾ ಪುರುಷರು ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಲು ಬದ್ದನಾಗಿರುತ್ತಾನೆ. ಈ ಬಗೆಯ ಕಮ್ಮಗಳನ್ನು ಆಚರಿಸಿದ್ದರಿಂದಾಗಿ ಮತ್ತು ನಿರ್ವಹಿಸಿದ್ದರಿಂದಾಗಿ ಆತನು ಅಥವಾ ಆಕೆಯು ಸಾವಿನ ನಂತರ ದೇಹದ ವಿಘಟನೆಯ ನಂತರ ಸುಗತಿಯಲ್ಲಿ ಜನಿಸುತ್ತಾನೆ. ಒಂದು ವೇಳೆ ಆತನು ಸಾವಿನ ನಂತರ ದೇಹದಿಂದ ಬೇರ್ಪಟ್ಟ ನಂತರ ಸುಗತಿಯಲ್ಲಿ ಜನಿಸದಿದ್ದರೇ ಮಾನವನಾಗಿಯೇ ಹುಟ್ಟಿದರೇ ಆತನು ಎಲ್ಲಿಯೇ ಹುಟ್ಟಲಿ ಆತನು ದೀಘರ್ಾಯುವಾಗಿಯೇ ಜೀವಿಸುವಂತವನಾಗುತ್ತಾನೆ. ಈ ರೀತಿಯಾಗಿ ಮಾಣವನೇ ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಿ ಬದ್ದನಾಗಿದ್ದರೇ ಅದು ದೀಘರ್ಾಯುತನಕ್ಕೆ ಕೊಂಡಯ್ಯುತ್ತದೆ.

.

 'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುತ್ತಾರೆ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುತ್ತಾರೆ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ರೋಗಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡಿದ್ದರೇ ಈ ಬಗೆಯಲ್ಲಿ ರೋಗಗಳಿಂದ ಕೂಡಿರುತ್ತಾರೆ..

'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುವುದಿಲ್ಲ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುವುದಿಲ್ಲ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆರೋಗ್ಯಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗದಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡದಿದ್ದರೇ ಈ ಬಗೆಯಲ್ಲಿ ಆರೋಗ್ಯಗಳಿಂದ ಕೂಡಿರುತ್ತಾರೆ..

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಕುರೂಪಿಯಾಗಿ, ದುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕುರೂಪಿಗಳಾಗಿ, ದುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಸುರೂಪಿಯಾಗಿ, ಸುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸುರೂಪಿಗಳಾಗಿ, ಸುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸುವುದಿಲ್ಲ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಪ್ರಭಾವರಹಿತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವರಹಿತನಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸದೆ ಹೋಗಿರುತ್ತಾರೆ.



ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ, ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಪ್ರಭಾವವುಳ್ಳವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವವುಳ್ಳವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ


 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುವುದಿಲ್ಲ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಬಡವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಬಡವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುವುದಿಲ್ಲ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುತ್ತಾರೆ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಶ್ರೀಮಂತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಶ್ರೀಮಂತರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುತ್ತಾರೆ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುತ್ತಾರೆ, ಮತ್ತು ಅಹಂಕಾರಿಯಾಗಿರುತ್ತಾರೆ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುವುದಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಾರರು, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಾರನು, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡಲಾರರು, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಲಾರರು, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಲಾರರು, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಲಾರರು, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಲಾರರು, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ನೀಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ನೀಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿದ್ದರು, ಮತ್ತು ಅಹಂಕಾರಿಯಾಗಿದ್ದರು; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರಲಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಿಲ್ಲ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಿಲ್ಲ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರಲಿಲ್ಲ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರಲಿಲ್ಲ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರಲಿಲ್ಲ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರಲಿಲ್ಲ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರಲಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುವುದಿಲ್ಲ, ಮತ್ತು ಅಹಂಕಾರಿಯಾಗಿರುವುದಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡುತ್ತಾನೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸುತ್ತಾನೆ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಮಾನವನಾಗಿ ಹುಟ್ಟಿದ್ದರೇ ,ಆತನು ಉಚ್ಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಉಚ್ಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿಲಿಲ್ಲ, ಮತ್ತು ಅಹಂಕಾರಿಯಾಗಿರಲಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಿರುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಿರುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರುತ್ತಾರೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರುತ್ತಾನೆ.
 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ದಡ್ಡನಾಗಿ(ದುಪ್ರಜ್ಞನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ದುಪ್ರ್ರಜ್ಙನಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿರಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸುತ್ತಾರೆ ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ?
 ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ?
 ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ , ಆತನು ಮಹಾಪ್ರಾಜ್ಞನಾಗಿ (ಬುದ್ಧಿವಂತನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ಮಹಾಪ್ರಜ್ಞಾರಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದ್ದರು ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ? 
ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? 
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಹೀಗೆ ಮಾಣವನೇ ಈ ಬಗೆಯಲ್ಲಿ ಜನರು ಜೀವಿಸಿ ಹೀಗಾಗಿರುವರು.  ಅಲ್ಪಯುಷ್ಯನ ಹಾದಿಯು ಜನರನ್ನು ಅಲ್ಪಯುಷ್ಯನನ್ನಾಗಿಸುತ್ತದೆ. ದೀಘರ್ಾಯುಸ್ಸಿನ ಹಾದಿಯು ಜನರನ್ನು ದೀಘರ್ಾಯುಸ್ಸನ್ನಾಗಿ ಮಾಡುತ್ತದೆ. ರೋಗಗಳ ಹಾದಿಯಲ್ಲಿ ಹೋಗುವವರು ರೋಗಿಗಳಾಗುತ್ತಾರೆ, ಆರೋಗ್ಯದ ಹಾದಿಯು ಜನರನ್ನು ಆರೋಗ್ಯನನ್ನಾಗಿಸಿದೆ, ಈ ಬಗೆಯ ಹಾದಿಯಲ್ಲಿ ಜೀವಿಸಿ ಕುರೂಪಿಗಳಾಗಿರುವರು, ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಸುರೂಪಿಗಳಾಗುವರು. ಈ ಬಗೆಯ ಹಾದಿಯಲ್ಲಿ ಸಾಗಿದಾಗ ಪ್ರಭಾವರಹಿತರು ಆಗುವರು. ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಪ್ರಭಾವಶಾಲಿಗಳಾಗುವರು. ಬಡತನದ ಹಾದಿಯು ಜನರನ್ನು ಬಡವರನ್ನಾಗಿಯು, ಸಿರಿತನದ ಹಾದಿಯು ಜನರನ್ನು ಸಿರಿವಂತರನ್ನಾಗಿಯು ಹಾಗೆಯೇ ನೀಚಕುಲದ ಹಾದಿಯು ಜನರನ್ನು ನೀಚರನ್ನಾಗಿಯು, ಉಚ್ಚಕುಲದ ಹಾದಿಯು ಜನರನ್ನು ಉಚ್ಚರನ್ನಾಗಿಯು ಮತ್ತು ದಡ್ಡತನದ ಹಾದಿಯು ಜನರನ್ನು ದಡ್ಡರನ್ನಾಗಿಯು ಮತ್ತು ಮಹಾಪ್ರಜ್ಞರ ಹಾದಿಯು ಜನರನ್ನು ಮಹಪ್ರಜ್ಞಾರನ್ನಾಗಿಯು ಮಾಡುತ್ತದೆ.

ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು

ಯಾವಗ ಭಗವಾನರು ಹೀಗೆ ನುಡಿದರೊ ಆಗ ತೊದೆಯ್ಯನ ಮಗನಾದ ಸುಭನು ಭಗವಾನರಿಗೆ ಹೀಗೆ ನುಡಿದನು. : ಭವ್ಯವಾಗಿ ನುಡಿದಿರಿ ಗೋತಮರೇ ! ಗೋತಮರೇ ಅತುತ್ತಮವಾಗಿ ನುಡಿದಿರಿ! 
ಧಮ್ಮವು ಭಗವಾನರಿಂದ ಅನೇಕ ವಿಧದಲ್ಲಿ ಸ್ಪಷ್ಟಿಕರಣಗೊಂಡಿತು. 
ಹೇಗೆಂದರೇ ತಲೆಕೆಳಕಾಗಿರುವುದನ್ನು ಸರಿಯಾಗಿ ನಿಲ್ಲಿಸಿದಂತೆ, 
ಅಡಗಿರುವುದನ್ನು ಅನಾವರಣಗೊಳಿಸಿದಂತೆ, 
ದಾರಿ ತಪ್ಪಿದವನಿಗೆ ಮಾರ್ಗ ತೊರಿಸಿದಂತೆ, 
ಕತ್ತಲೆಯಲ್ಲಿರುವವನಿಗೆ ಪ್ರದೀಪವನ್ನು ಹಿಡಿದು ರೂಪಗಳನ್ನು ತೋರಿಸಿದಂತೆ, 

ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಸ್ಪಷ್ಟಿಕರಿಸಿದ್ದಾರೆ, 
ನಾನು ಭಗವಾನ ಗೋತಮರ ಶರಣು ಹೋಗುವೆನು, 
ಅವರ ಅಧ್ಭುತವಾದ ಧಮ್ಮಕ್ಕೆ ಶರಣು ಹೋಗುವೆನು, 
ಅವರ ಅಸಮಾನ ಸಂಘಕ್ಕೂ ಶರಣು ಹೋಗುವೆನು.
ಭಗವಾನರು ನನಗೆ ಅವರಲ್ಲಿ ಜೀವನ ಪರ್ಯಂತ ಶರಣು ಹೋದಂತಹ ಉಪಾಸಕನೆಂದು ಪರಿಗಣಿಸಲಿ


ಇಲ್ಲಿಗೆ ಕಮ್ಮವಿಪಾಕದ ವಿಶ್ಲೇಷಣೆಯ ಚಿಕ್ಕ ಸುತ್ತವು ಸಮಪ್ತಿಯಾಯಿತು.